English shape=
      

ವಾರದ ಸಂದೇಶ - Word For The Week

"ವಾರದ ಸಂದೇಶ" ವು ಪ್ರತೀ ವಾರ ಕಳುಹಿಸಲ್ಪಡುವ ಪತ್ರಿಕೆಯಾಗಿದೆ. ಪ್ರತೀ ಸಂಚಿಕೆಯು ಝ್ಯಾಕ್ ಪೂನನ್ ರವರ ಲೇಖನ, ಪುಸ್ತಕ ಅಥವಾ ಪ್ರಬೋಧನೆಗಳಿಂದ ಆಯ್ದ ಭಾಗವಾಗಿರುತ್ತದೆ.
2011 |  2012 |  2013
ಜಯದ ಜೀವಿತ
ಮಾರ್ಚ್ 2011 (1) - ಝ್ಯಾಕ್ ಪೂನನ್

(ಕೂಟಗಳಿಂದ ಆರಿಸಿದ್ದು - ಫೆಬ್ರವರಿ 2011)

ದೇವರ ನೀತಿ

  • ಅನೇಕ ಕ್ರೈಸ್ತರು ದೇವರ ನೀತಿ ಮಟ್ಟಕ್ಕೆ ಏರದೇ ಇರುವುದಕ್ಕೆ ಕಾರಣವೇನೆಂದರೆ, ಅವರು ತಮ್ಮ ಹೊರತೋರಿಕೆಯ (ನೇಮ ನಿಷ್ಠೆಗಳಿಂದ ಉಂಟಾಗುವ) ನೀತಿವಂತಿಕೆಯಲ್ಲೇ ತೃಪ್ತಿಹೊಂದಿರುತ್ತಾರೆ.

  • ಧರ್ಮಶಾಸ್ತ್ರವನ್ನು ಆಧಾರವಾಗಿರಿಸಿರುವ ನೀತಿಯು (ಒಳ್ಳೇದರ ಕೆಟ್ಟದರ ಅರುಹನ್ನು ಹುಟ್ಟಿಸುವ ಮರ) ಸರಿ-ತಪ್ಪುಗಳನ್ನು ಗುರುತಿಸಬಹುದು, ಆದರೆ ಅದು ಮರಣದೆಡೆಗೆ ಒಯ್ಯುವ ದಾರಿ. ದೇವರ ನೀತಿಯು (ಜೀವವೃಕ್ಷ) ಪವಿತ್ರಾತ್ಮನಿಂದ ನಡೆಸಲ್ಪಡುವುದು.

  • ಯೇಸುವು ತನ್ನ ಜೀವತೆತ್ತಿದ್ದು ನಮ್ಮ ಪಾಪ ಮನ್ನಣೆಗೆ ಮಾತ್ರವೇ ಅಲ್ಲ, ಇನ್ನೂ ಉನ್ನತವಾದ ಉದ್ದೇಶಕ್ಕಾಗಿ.

  • ದೇವರನ್ನು ಮಹಿಮೆಗೊಳಿಸುವದರ ರಹಸ್ಯ, ಅವರು ನಮಗಾಗಿ ಇರಿಸಿರುವ ಕಾರ್ಯವನ್ನು ಪೂರೈಸುವದೇ ಆಗಿದೆ(ಯೋಹಾ. 17:4).

  • ದೇವರ ನೀತಿಯು:

    • ಯೇಸುವಿನ ಜಯ ಜೀವಿತದ ರಹಸ್ಯ: "ನನ್ನ ಚಿತ್ತದಂತೆ ನಡೆಯುವದಕ್ಕಾಗಿ ನಾನು ಬಂದಿಲ್ಲ, ನನ್ನನ್ನು ಕಳುಹಿಸಿದಾತನ ಚಿತ್ತವನ್ನೇ ನೆರವೇರಿಸುವದಕ್ಕೆ ಪರಲೋಕದಿಂದ ಬಂದೆನು" (ಯೋಹಾ. 6:38).

      ಎಲ್ಲಾ ನ್ಯಾಯ ಸಮ್ಮತ ಕಾರ್ಯಗಳಲ್ಲಿ ಲಾಭದಾಯಕವಾದವುಗಳನ್ನು ಮಾತ್ರ ಆಯ್ದುಕೊಂಡು ಕೈಗೊಳ್ಳುವುದರಲ್ಲಿದೆ (1 ಕೊರಿ. 6:12).

    • ನಾವು ನಮ್ಮನ್ನೇ ತೃಪ್ತಿ ಪಡಿಸದಿರುವಂತೆ ದೇವರಾತ್ಮನು ನಮ್ಮನ್ನು ನಡೆಸುತ್ತಾನೆ (ರೋಮಾ. 15:3).

    • ನಾವು ಯಾವ ಸಮಯದಲ್ಲಿಯೂ ಇತರರಿಗಾಗಿ ತೊಂದರೆ ಅನುಭವಿಸಲು ಸಿದ್ದರೆಂದು ತೊರಿಸುವುದಾಗಿದೆ.(ಉದಾಹರಣೆಗೆ, ನಿಕೊದೇಮನು ನಡುರಾತ್ರಿಯಲ್ಲಿ ಕದತಟ್ಟಿದರೂ ಯೇಸುವು ಆತನನ್ನು ಬರಮಾಡಿಕೊಂಡರು - ಯೋಹಾ. 3:2).

    • ನಮ್ಮ ಮನಸ್ಸೇಚ್ಚೆಯಂತೆ ಯಾವುದಾದರೂ, ಯಾವಾಗಲೂ ಮಾಡದೆ, ದೇವರ ಸೂಚನೆಗೆ ಅನುಸಾರವಾಗಿ ಮಾತ್ರವೇ ಸಾಗುವಂತೆ ನಮ್ಮನ್ನು ಬದಲಾಯಿಸುವದು (ಯೋಹಾ. 7:6).

    • ಯಾರಿಂದಲೂ ಏನನ್ನೂ ಅಪೇಕ್ಷಿಸದೆ, ಯಾರ ಪ್ರತಿಯಾಗಿಯೂ ಮನದೊಳಗೆ ದೂಷಣೆಯನ್ನು ಹೊಂದದಿರುವದು. ಯೇಸುವು ಇತರರಿಂದ ರಾತ್ರಿ ಮಲಗಲು ಸ್ಥಳವನ್ನೂ ಸಹ ಬಯಸಲಿಲ್ಲ (ಯೋಹಾ. 7:53-8:2).

    • ಮಾನವೀಯವಾಗಿ ನೋಡಿದರೆ ಸಮಂಜಸವಾಗಿ ಕಾಣದಿದ್ದರೂ, ಬಾಹ್ಯ ಉಜ್ಜೀವನ ನಡೆಯುವ ಸ್ಥಳವನ್ನೂ ಸಹ ದೇವರಾತ್ಮನು ತ್ಯಜಿಸಬಹುದು. ( ಲೂಕ. 4:40-44 ; 1 ಕೊರಿ. 2:14-15 ).

    • ಅಪ್ರಬುದ್ದ ಮಗುವಿನಿಂದ (ರೋಮಾ. 8:16), ಪ್ರಬುದ್ದ ಮಗನಾಗಲು (ಮತ್ತು ಮಗಳಾಗಲು) ಪವಿತ್ರಾತ್ಮನು ನಡೆಸುತ್ತಾನೆ, ಅಂದರೆ ಪವಿತ್ರಾತ್ಮನಿಂದ ಜನಿಸಿದ್ದು ಮಾತ್ರವಲ್ಲ, ಪವಿತ್ರಾತ್ಮನಿಂದ ನಡೆಸಲ್ಪಡುವುದು (ರೋಮಾ. 8:14).

    • ಯಾವುದೇ ಕಾರ್ಯದಲ್ಲಿ ಮಗ್ನರಾಗಿದ್ದರೂ, ದೇವರ ತಡೆಯನ್ನು ಅನುಭವಿಸಲು ನಮ್ಮನ್ನು ಸದಾ ಸಿದ್ದರಾಗಿಸುವುದು.

    • ಈರುಳ್ಳಿಯನ್ನು ಪದರು ಪದರಾಗಿ ಕೀಳುವಂತೆ, ನಮ್ಮೊಳಗಿರುವ ಸ್ವಾರ್ಥಭಾವವನ್ನು ಕೀಳುತ್ತ ಬರುವಂತೆ ನಮ್ಮನ್ನು ಪ್ರೋತ್ಸಾಹಿಸುವದು.

    • ಎಲ್ಲಾ ಪರಿಸ್ಥಿತಿಯಲ್ಲೂ, ಎಲ್ಲರೊಡನೆಯೂ, ಯೇಸುವಿನ ಮನಸ್ಸು ನಮ್ಮೊಳಗೆ ಹೊಂದಿರುವುದು (ಫಿಲಿ. 2:5), ಒಳಗಿರುವ ಒಣ ಹೆಮ್ಮೆ, ಸ್ವಾರ್ಥವಿಲ್ಲದಂತಹ ಮನಸ್ಸನ್ನು ಹೊಂದಿರುವುದು (ಫಿಲಿ. 2:3).

    • ಮೊದಲು ನಮ್ಮನ್ನೇ ನ್ಯಾಯ ವಿಚಾರಣೆ ಮಾಡುವಂತೆ, ನಡೆಸುತ್ತದೆ. (1 ಪೇತ್ರ. 4:17).

    ದೇವರ ವಿಶ್ರಾಂತಿಗೆ ಪ್ರವೇಶಿಸುವುದು

  • ಹೆಚ್ಚಿನ ಕ್ರೈಸ್ತರು ಒಬ್ಬ ಕೋಟ್ಯಾಧಿಪತಿ ತಂದೆಯ ಮರಣಪತ್ರ(ಉಯಿಲು)ವನ್ನು ಸತ್ಯವೇದಕ್ಕಿಂತ ಹೆಚ್ಚಾಗಿ ಓದುವರು - ಏಕೆಂದರೆ ದೇವರಿಗಿಂತ ಹೆಚ್ಚಾಗಿ ಅವರು ಪ್ರೀತಿಸುವದು ಹಣವನ್ನು!

  • ನಾವು ಗುಣಗುಟ್ಟುವದು ಅಥವಾ ಹೃದಯದೊಳಗೆ ಅಪನಂಬಿಕೆ ಇರಿಸಿರುವದು ಇವನ್ನು ಮಾಡಿದರೆ, ನಾವು ನಂಬಿರುವದು "ದೈತ್ಯಗಾತ್ರದ" ಪಿಶಾಚಿ ಹಾಗೂ "ಮಿಡತೆ"ಯಂತಿರುವ ಯೇಸುವನ್ನು (ಅರಣ್ಯಕಾಂಡ 13:33). ದೇವರ ವಿಶ್ರಾಂತಿಯನ್ನು ಸೇರುವದೆಂದರೆ ನಮ್ಮ ದೇಹದಲ್ಲಿ ನೆಲೆಯಾಗಿರುವ ಎಲ್ಲಾ ದೈತ್ಯರನ್ನು ಸೋಲಿಸುವದು. ಇದು ನಿಮ್ಮಲ್ಲಿ ನಡೆಯಬೇಕಾದರೆ ನೀವು ಯೇಸುವನ್ನು ಸರ್ವಶಕ್ತರನ್ನಾಗಿ ಹಾಗೂ ಸೈತಾನನನ್ನು "ಮಿಡತೆ"ಯಂತೆ ಕಾಣಬೇಕು.

  • "ಕ್ರಿಸ್ತನು ನಮ್ಮ ಪಾಪಗಳನ್ನು ಕ್ಷಮಿಸಬಲ್ಲನು" ಎಂದು ಮಾತ್ರವೇ ಸಾರುವ ಸುವಾರ್ತೆಯು ನಿಜವಾದ 'ಸುವಾರ್ತೆ'ಯೇ ಅಲ್ಲ - ಏಕೆಂದರೆ ಅದು ನಮ್ಮನ್ನು ನಮ್ಮ ಪಾಪಗಳ ಗುಲಾಮತನದಲ್ಲಿ ಬಿಟ್ಟಿರುವದು.

  • ಅಪೋಸ್ತಲರು ತಪ್ಪದೆ ಸಾರುತ್ತಿದ್ದುದು, ತಾವು ಕ್ರಿಸ್ತನ ಪುನರುತ್ಥಾನದ ಸಾಕ್ಷಿಗಳು ಎಂಬುದಾಗಿ - ಅವರ ಸಾಕ್ಷಿ ಶಿಲುಬೆಯ ಮರಣದ್ದಾಗಿರಲಿಲ್ಲ! ಪ್ರತೀ ಬಾರಿ ನಾವು ಶಿಲುಬೆಯ ವಿಚಾರವನ್ನು ವಿವರಿಸುವಾಗ, ಕ್ರಿಸ್ತನ ಪುನರುತ್ಥಾನ ಶಕ್ತಿಯು ಎಂಥಹದೆಂದು ಘೋಷಿಸುವದು ಅವಶ್ಯ.

  • ಮಾನವನಲ್ಲಿ ಮರಣದ ಭಯವು ಇನ್ಯಾವುದೇ ಭಯಕ್ಕಿಂತ ದೊಡ್ಡದಾದದು. ಯೇಸುವು ಮರಣದ ಭಯವನ್ನು ನಿವಾರಿಸಿ ನಾವು ಎಲ್ಲಾ ಭಯಗಳಿಂದ ಪಾರಾಗುವದು ಸಾಧ್ಯವಾಗಿಸಿದರು (ಇಬ್ರಿಯ 2:14,15).

  • ನಾವು ಎಲ್ಲಾ ಭಯಗಳಿಂದ ಸಂಪೂರ್ಣವಾಗಿ ಪಾರಾಗಲು ಸಾಧ್ಯವಿದೆ, ಏಕೆಂದರೆ "ಯೇಸುವು ಎಂಥವರಾಗಿದ್ದಾರೋ, ನಾವು ಅಂಥವರಾಗಿಯೇ ಈ ಲೋಕದಲ್ಲಿದ್ದೇವೆ" (1 ಯೋಹಾ 4:17).

  • ದೇವರು ನಮ್ಮನ್ನು ಆತನಿಗೆ ವಿಧೇಯರಾಗಿ ಅಥವಾ ಅವಿಧೇಯರಾಗಿ ಇರುವ ಸ್ವಾತಂತ್ರ್ಯವನ್ನು ನೀಡದೆ ನಮ್ಮನ್ನು ಪರಿಶುದ್ಧಗೊಳಿಸುವದು ಸಾಧ್ಯವಿಲ್ಲ. ಅವರು ಮಾನವನನ್ನು ಒಂದು ’ರೋಬೋಟ್’ ಯಂತ್ರವಾಗಿ ನಿರ್ಮಿಸಲಿಲ್ಲ.

  • ಕೊರ್ನೇಲ್ಯನಿಗೆ ದರ್ಶನವಾದ ದೇವದೂತನು ಅವನಿಗೆ ಸುವಾರ್ತೆಯನ್ನು ಬೋಧಿಸುವದು ಸಾಧ್ಯವಿರಲಿಲ್ಲ, ಏಕೆಂದರೆ ಆ ದೇವದೂತನು ಸ್ವತಃ ಸುವಾರ್ತೆಯನ್ನು ಅನುಭವಿಸಿರಲಿಲ್ಲ (ಅಪೋಸ್ತಲ ಕೃತ್ಯಗಳು 10). ಅದಕ್ಕಾಗಿ ದೇವರಿಗೆ ಪೇತ್ರನು ಬೇಕಾಗಿದ್ದನು. ನಾವು ಅನುಭವದಿಂದ ತಿಳಿದಿರದ ಏನನ್ನೂ ಬೋಧಿಸಲು ದೇವರು ಸಮ್ಮತಿಸುವದಿಲ್ಲ.

  • ಆದಾಮ ಮತ್ತು ಹವ್ವರ ಜೀವನದ ಮೊದಲನೇ ದಿನದಲ್ಲಿ (ದೇವರೊಂದಿಗೆ ಅವರಿಬ್ಬರು ನಡೆದ ಆ ಮೊದಲನೇ ಸಬ್ಬತ್ ದಿನ) ಸೈತಾನನು ಅವರನ್ನು ಶೋಧನೆಗೆ ಒಳಪಡಿಸಲು ಸಾಧ್ಯವಾಗಲಿಲ್ಲ. ನಾವು ದೇವರ ಸನ್ನಿಧಿಯಲ್ಲಿ ನಡೆಯುತ್ತಾ ಸಾಗುವಾಗ ಶೋಧನೆಯು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ. "ಅಚಲ ವಿಶ್ರಾಂತಿಕರವಾದ ತಂಗುದಾಣ, ದೇವರ ಹೃದಯದ ಬಳಿಯಲ್ಲಿರುವ ಆ ತಾಣ, ಪಾಪದ ಪಾಶಕ್ಕೆ ಅಲ್ಲಿ ಎಡೆಯಿಲ್ಲ".

    ಕ್ರಿಸ್ತನನ್ನು ಮತ್ತು ಅವರ ಸಭೆಯನ್ನು ಪ್ರೀತಿಸುವುದು

  • ಕ್ರಿಸ್ತನ ಪ್ರೀತಿಯು:

    • ಗೆತ್ಸೇಮನೆಯಲ್ಲಿ ಕಂಡುಬರುತ್ತದೆ. ನಮಗಾಗಿ ಯೇಸುವು ತನ್ನ ಮತ್ತು ತಂದೆಯ ನಡುವಿನ ನಿತ್ಯ ಅನ್ಯೋನ್ಯತೆಯನ್ನು ಶಿಲುಬೆಯ ಮೇಲೆ ಮೂರು ಗಂಟೆಗಳ ಕಾಲ ಕಡಿದುಕೊಳ್ಳುವದಕ್ಕೆ ತಾನು ಸಿದ್ಧನೆಂದು ತಂದೆಯಾದ ದೇವರಿಗೆ ತಿಳಿಸಿದರು. ಯೇಸುವು ಕುಡಿಯಲು ಅಂಜಿದ ಪಾತ್ರೆಯು ಇದೇ ಆಗಿತ್ತು.

    • ಶಿಲುಬೆಯ ಮೇಲೆ ನಮಗೋಸ್ಕರ ಅವರು ಅನುಭವಿಸಿದ ನರಕದ ಅನುಭವದಲ್ಲಿ (= ತಂದೆಯಿಂದ ಮೂರು ಗಂಟೆಗಳ ಕಾಲ ಕೈಬಿಡಲ್ಪಟ್ಟ ಅನುಭವ) ಕಂಡುಬರುತ್ತದೆ.

    • ಕ್ರಿಸ್ತನು ಸಭೆಗೆ ತನ್ನನ್ನು ಒಪ್ಪಿಸಿಕೊಟ್ಟದ್ದರಲ್ಲಿ ಕಾಣುತ್ತದೆ (ಎಫೆ. 5:25).

    • ತನಗೆ ಸುಮ್ಮನೆ ದೊರೆತ(ಬೆಲೆಯಿಲ್ಲದ) ಯಾವುದನ್ನೂ ತಂದೆಗೆ ಅರ್ಪಿಸಲಿಲ್ಲ ಎನ್ನುವ ಸತ್ಯಾಂಶದಲ್ಲಿ ತೋರಿಬರುತ್ತದೆ (2 ಸಮುವೇಲನು 24:24).

  • ನಮ್ಮ ಪಾಪದ ಭಯಂಕರತೆಯನ್ನು ನಾವು ತಿಳಿದುಕೊಳ್ಳದಿದ್ದಲ್ಲಿ ಶಿಲುಬೆಯ ಅಮೂಲ್ಯತೆಯು ನಮಗೆ ಗೋಚರವಾಗದು.

  • ನಾವು ಕ್ಷಮಿಸಲ್ಪಟ್ಟಿರುವದು "ಸ್ವಲ್ಪ ಮಾತ್ರವೇ" ಎಂದು ನಾವು ಎಣಿಸಿದಲ್ಲಿ, ಹಣವೇ ದೇವರಿಗಿಂತ ಪ್ರಾಮುಖ್ಯವಾದದು ಎನ್ನುವದು ನಮ್ಮ ಅಭಿಪ್ರಾಯವಾಗುವದು (ಲೂಕ 7:47).

  • ಶಿಲುಬೆಯ ಮೇಲೆ ಕ್ರಿಸ್ತನು ನಮಗಾಗಿ ಅನುಭವಿಸಿದ "ಅನಾನುಕೂಲತೆ"ಗೆ ಕರ್ತನಾದ ದೇವರ ಸೇವೆಯಲ್ಲಿ ನಾವು ಅನುಭವಿಸುತ್ತಿರುವ ಅನಾನುಕೂಲತೆಗಳನ್ನು ಹೋಲಿಸಿದಾಗ, ಇವು ಏನೇನೂ ಇಲ್ಲ ಎಂದು ನಮಗೆ ಗೋಚರವಾಗುತ್ತದೆ.

  • ಯೇಸುವು ತನ್ನ ಮೇಲೆ ಮತ್ತು ತನ್ನ ದೇಹವಾದ ಕ್ರಿಸ್ತನ ಸಭೆಯ ಮೇಲೆ ಇಂಥಹ ಪ್ರೀತಿಯನ್ನು ಇರಿಸಿರುವವರನ್ನು ಹುಡುಕುತ್ತಿದ್ದಾರೆ.


ಮೇಲಿನ ಸಂದೇಶಗಳನ್ನು ಪೂರ್ಣರೂಪದಲ್ಲಿ ಈ ವೆಬ್‍ಸೈಟಿನಲ್ಲಿ ಕೇಳಬಹುದು:

http://www.ravensministry.com/Austin2011.html


ಅನುವಾದಾ : ಜಾನ್     ಈ ಪುಟವನ್ನು ಮುದ್ರಿಸಿಕೊಳ್ಳಿ    ಈ ಪುಟವನ್ನು ಕಳುಹಿಸಿ

"ವಾರದ ಸಂದೇಶ!" - ನಿಮ್ಮ ಯಾವುದೇ ಅನಿಸಿಕೆ ಅಥವಾ ಪ್ರಶೆಗಳಿದ್ದಲ್ಲಿ ದಯವಿಟ್ಟು ನಮಗೆ ಬರೆಯಿರಿ :
kannada@cfcindia.com, cfc@cfcindia.com
ಈ ಪುಟವನ್ನು ಸ್ನೇಹಿತರಿಗೆ ಕಳುಹಿಸಿ | ವಾರದ ಸಂದೇಶ | ದೈವ ಸಂದೇಶಗಳು | ಆಡಿಯೋ| ವಿಡಿಯೋ | ಸಂಪರ್ಕಿಸಿರಿ

© Copyright - Christian Fellowship Church , Bangalore. (INDIA)